ನಾನೆಷ್ಟು ಒಬ್ಬಂಟಿ ಎಂದುಕೊಳ್ಳುತ್ತೇನೋ,
ಜಗತ್ತು ನನ್ನನ್ನು ಅಷ್ಟೇ ಒಬ್ಬಂಟಿಯಾಗಿ ಮಾಡುತ್ತದೆ.
ನನಗೆ ಎಷ್ಟು ಗೌರವ ಸಿಗಬೇಕೋ,
ಅದನ್ನು ಪಡೆಯಲು ನಾನು ಯಾರನ್ನೂ ಬೇಡಬೇಕಾಗಿಲ್ಲ.
ದೇಹಕ್ಕೆ ಆದ ಗಾಯಕ್ಕಿಂತಲೂ,
ಹೃದಯಕ್ಕಾದ ಗಾಯ ತುಂಬಾ ನೋಯಿಸುತ್ತದೆ.
ನಾನು ಎಷ್ಟು ಹೆಚ್ಚು ಹೆಚ್ಚು ನಗುತ್ತೇನೋ,
ನನ್ನ ನೋವು ಅಷ್ಟು ಆಳ ಇದೆ.
ನಾನು ಎಷ್ಟೇ ಪ್ರಾರ್ಥಿಸಿದರು ಸಹ,
ನನಗೆ ಏನು ಸಿಗಬೇಕೋ ಅದೇ ಸಿಗುತ್ತದೆ.
ನಮ್ಮ ಎಲ್ಲಾ ಸುಳ್ಳು ಸಂಬಂಧಗಳಿಗೂ,
ಕೊನೆ ಇದೆ ಮತ್ತೆ ಅದು ಹಳಸುತ್ತದೆ ಕೂಡ.
ಕೆಲವೊಮ್ಮೆ ನಮ್ಮ ಕಣ್ಣೀರು,
ಮಾತಿಗಿಂತಲೂ ಹರಿತವಾಗಿರುತ್ತದೆ.
- ಎಲ್ಲೋ ಕೇಳಿದ್ದರ ಭಾವಾನುವಾದ.
ದಿನಕರ...
ReplyDeleteತುಂಬಾ ಒಳ್ಳೆಯ ಮಾತುಗಳು..
ತೂಕದ ಮಾತುಗಳು...
ನಿಮ್ಮ ಬ್ಲಾಗ್ ಚೆನ್ನಾಗಿದೆ...
ಬರೆಯಿರಿ ಓದಲು ನಾವಿದ್ದೇವೆ...
ಪ್ರಕಾಶಣ್ಣ..
ಪ್ರಕಾಶಣ್ಣ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....
ReplyDelete